9.1 C
New York
Friday, October 18, 2024

ಎಇಇ ನಾಗರಾಜ್ ಕಾರ್ಯಕ್ಕೆ ಶ್ಲಾಘಿಸಿದ ರೈತರು

ಹೊಳಲ್ಕೆರೆ : ಪಟ್ಟಣ ಶಾಖೆ ರೈತ ಸಂಘದ ವತಿಯಿಂದ ಪಟ್ಟಣದ ಹಿರೇಕೆರೆ ಹೂಳೆತ್ತುವ ಹಾಗೂ ಏರಿ ಎತ್ತರಿಸಿ ಕಲ್ಲಕಟ್ಟಡ ಕೆಲಸ 2019 – 20 ನೇ ಸಾಲಿನಲ್ಲಿ ಕಾಮಗಾರಿ ಕಳಪೆ ಆಗಿರುವ ಕುರಿತು ಸಣ್ಣ ನೀರಾವರಿ ಇಲಾಖೆ ನೂತನ A E E ನಾಗರಾಜ್ ರವರಿಗೆ 15 ದಿನಗಳ ಹಿಂದೆ ಮನವಿ ಮಾಡಲಾಗಿತ್ತು ಪಟ್ಟಣ ಶಾಖೆಯ ರೈತ ಸಂಘದ ಹೋರಾಟ ಹಾಗೂ ಮನವಿಗೆ ತಕ್ಷಣ ಸ್ಪಂದಿಸಿ ವಾರದೊಳಗೆ ಇಟಾಚಿ,ಲಾರಿಗಳ ಮುಖಾಂತರ ವಾರದಿಂದ ಕೆಲಸ ಮಾಡುತ್ತಿದ್ದಾರೆ ಹಿರೇಕೆರೆ ಹಿನ್ನೀರಿನ ಕಾಲ್ಕೆರೆರ ಪರಮೇಶ್ವರಪ್ಪರ ತೋಟದಿಂದ ಶಫಿ ತೋಟದವರೆಗೆ 4 ಅಡಿ ಗ್ರಾವೆಲ್ ಮಣ್ಣು ಹೊಡೆದು ಹಿನ್ನೀರಿನ ಸುಮಾರು 50 ಎಕರೆ ಜಮೀನು ಮುಳುಗಡೆ ಆಗುವುದನ್ನು ತಪ್ಪಿಸಿದ್ದಾರೆ ಪಟ್ಟಣ ಶಾಖೆ ರೈತ ಸಂಘ ಹಾಗೂ ಹಿನ್ನೀರಿನ ಜಮೀನುದಾರರು ಈ ಕೆಲಸವನ್ನ ಶ್ಲಾಘಿಸಿದ್ದಾರೆ, ಈ ಸಮಯದಲ್ಲಿ ರೈತ ಸಂಘದ ಅಧ್ಯಕ್ಷ ಎಸ್,ಸಿದ್ದರಾಮಪ್ಪ, ಪ್ರಧಾನ ಕಾರ್ಯದರ್ಶಿ ಕೆ,ಎನ್,ಅಜಯ್, ಖಜಾಂಚಿ ಶಿವಮೂರ್ತಿ,ಸಣ್ಣಕ್ಕಿ ಪ್ರಭಾಕರ್,ಲೋಕಮಾನ್ಯ ತಿಲಕ್, ಕೆ,ಶ್ರೀಧರ್,ದುಕ್ಕಡ್ಲೆ ರಾಜಪ್ಪ,ರವಿಕುಮಾರ್, ವಿಶ್ವನಾಥಯ್ಯ ಸಂಜೀವಪ್ಪ,ದೇವರ ಮನೆ ದರ್ಶನ್,ಪ್ರದೀಪ್,ಸಣ್ಣಕ್ಕಿ ಶಶಿಕುಮಾರ್,ಲೋಕೇಶ್, ವೃಷಬೇಂದ್ರಪ್ಪ,ವಿರೂಪಾಕ್ಷಪ್ಪ ಇದ್ದರು.

ವರದಿ : ನಾಗರಾಜ್ ಕೆ ಹೊಳಲ್ಕೆರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles