18.4 C
New York
Saturday, October 5, 2024

ಗಾಂಧಿ ಜಯಂತಿ ಪ್ರಯುಕ್ತ ಜೆ.ಎಚ್.ವಿ ಶಾಲೆ ವಿದ್ಯಾರ್ಥಿಗಳಿಂದ ಗ್ರಾಮ ಸ್ವಚ್ಛತೆ

ಸಿರಿಗೇರಿ : ಸಿರುಗುಪ್ಪ ತಾಲ್ಲೂಕು, ಸಿರಿಗೇರಿ ಗ್ರಾಮ 2008 ರಿಂದ ಸತತವಾಗಿ ಜೆ.ಎಚ್.ವಿ ಶಾಲೆ ವಿದ್ಯಾರ್ಥಿಗಳಿಂದ ಪ್ರತಿವರ್ಷದಂತೆ ಈ ವರ್ಷಕೂಡ, ಗಾಂಧಿ ಜಯಂತಿ ಪ್ರಯುಕ್ತ ಗ್ರಾಮ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸ್ವಚ್ಛತಾ ಕಾರ್ಯಕ್ರಮವು ಬಸವನಪೇಟೆಯಿಂದ, ಎಸ್.ಬಿ.ಐ ಬ್ಯಾಂಕ್ ಬೀದಿ, ಗ್ರಾಮದ ತೇರುಬೀದಿ ,ಮುಖ್ಯ ವೃತ್ತ, ಶ್ರೀ ನಾಗನಾಥೇಶ್ವರ ದೇವಸ್ಥಾನದ ಆವರಣ, ಪೋಲಿಸ್ ಠಾಣೆ ಬೀದಿ, ಗ್ರಾಮ ಪಂಚಾಯಿತಿ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಆಸ್ಪತ್ರೆ ಬೀದಿ, ಸಿರಿಗೇರಮ್ಮ ದೇವಸ್ಥಾನ ಆವರಣ, ಜಾಮಿಯಾ ಮಸೀದಿ ಬೀದಿ ಮತ್ತು ಬಸ್ ನಿಲ್ದಾಣ, ಸ್ವಚ್ಛಗೊಳಿಸಿ ಶಾಲೆಗೆ ತಲುಪಿ ಮುಕ್ತಾಯಗೊಳಿಸಿದರು.

ನಂತರ ಶಾಲೆಯ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ದೊಡ್ಡನಗೌಡ ಮಾತನಾಡಿ ಗಾಂಧೀಜಿಯವರ ತತ್ವಗಳನ್ನು ಕೇವಲ ಓದುವುದು ಮಾತ್ರವಲ್ಲದೆ ಕಾರ್ಯರೂಪದಲ್ಲಿ ತೊಡಗಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಗ್ರಾಮದ ಪ್ರತಿಯೊಬ್ಬ ಪ್ರಜೆಯು ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು.

ಜೆ.ಎಚ್.ವಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಯವರು ಹಾಗೂ ಮುಸ್ಲಿಂ ಮುಖಂಡ ಎಸ್.ಮುರ್ಶಿದ್ ಅಹಮದ್. ಜೆ.ಬಸವನಗೌಡ, ಕಸ ತ್ಯಾಜ್ಯ ನಿರ್ವಹಣಾ ಚಾಲಕಿ ನಾಗಮ್ಮ ಗ್ರಾಮ ಸ್ವಚ್ಛತೆಯಲ್ಲಿ ತೊಡಗಿದ್ದರು. ಸ್ಥಳೀಯ ಇಡ್ಲಿ ಬಂಡಿ ಬಳೆಗಾರ್ ವೀರೇಶ್ ಗೌಡ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles