ಬಳ್ಳಾರಿ : ನಗರದ 23ನೇ ವಾರ್ಡ್ ಮಹಾನಂದಿ ಕೊಟ್ಟಂ ಅಂಬೇಡ್ಕರ್ ನಗರದಲ್ಲಿರುವ ನಮ್ಮ ಕ್ಲಿನಿಕ್ ನ್ನು ಸ್ಥಳಾಂತರ ಮಾಡಲಾಗಿದೆ. ಸ್ಥಳಾಂತರ ಮಾಡಲಾದ ಸ್ಥಳ ಅಂಬೇಡ್ಕರ್ ನಗರ 2ನೇ ಕ್ರಾಸ್ ಬೈಲೂರು ಕೆಂಚಪ್ಪನವರ ಮನೆಯಲ್ಲಿ ಸ್ವಲ್ಪ ದಿನಗಳವರೆಗೆ ಅಂದರೆ ಅಂಬೇಡ್ಕರ್ ನಗರದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡೋವರಿಗೂ ಮನೆ ಬಾಡಿಗೆಯನ್ನು ಪಡೆಯಲಾಗಿರುತ್ತದೆ. ಎಂದು ಮಹಾನಗರ ಪಾಲಿಕೆಯ ಸದಸ್ಯರಾದ ಪಿ ಗಾದೆಪ್ಪ ರವರು ತಿಳಿಸಿದರು. ನಂತರದಲ್ಲಿ ಮಾತನಾಡಿ ನಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಮಹಾನಂದಿ ಕೊಟ್ಟಂ , ಅಂಬೇಡ್ಕರ್ ನಗರ , ಕನ್ನಡ ನಗರ , ಭಗತ್ ಸಿಂಗ್ ನಗರದ ಬಡವರಿಗೆ ಅನುಕೂಲ ಆಗಲಿ ಎಂದು ರಾಜ್ಯದ ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್ಗಳನ್ನು ತೆರೆಯಲಾಗಿದೆ. ಇದನ್ನು ಎಲ್ಲಾ ನಗರ ನಿವಾಸಿಗಳು ಸದುಪಯೋಗ ಪಡೆಯಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ನಮ್ಮ ಕ್ಲಿನಿಕ್ ಸಿಬ್ಬಂದಿ ವರ್ಗದವರು , ಆಶಾ ಕಾರ್ಯಕರ್ತರು , ಸಾರ್ವಜನಿಕರು ಹಿರಿಯ ಮುಖಂಡರುಗಳು ಉಪಸ್ಥಿತರಿದ್ದರು.